Friday 10 January 2014

ನಾ ಕಲ್ಲಾಗಿ ಬಿಡಬೇಕು ಮತ್ತೆ
ನೀ   ಕೆತ್ತಿದ ಚಿತ್ತಾರ, ಆಕಾರಗಳನ್ನೆಲ್ಲ
ಅಳಿಸಿ, ಸವೆಸಿ...
ಸುರಿವ ಮಳೆಗೆ ಒಡ್ಡಿಕೊಂಡು, ಚಿತ್ತಾರದ  ಸಂದಿಯ
ಧೂಳನ್ನೆಲ್ಲ ತೊಳೆದು ಕೊಚ್ಚ್ಚಿ
ಭೋರ್ಗಲ್ಲಾಗಿ ಬಿಡಬೇಕು ಮತ್ತೆ... 
ಆದರೆ ಒಂದೇ ಸಂಶಯ, ಆತಂಕ,
ತೊರೆದಾವೇ ನಿನ್ನ ಉಳಿಪೆಟ್ಟಿನ ನಿಶಾನೆ.. ??


4 comments:

  1. ಗತ ಸ್ಮೃತಿ ಎಂಬುದು ಅಚ್ಚಳಿಯದ ಪಡಿ ಅಚ್ಚು, ಅದು ಅಳಿಸದು ಎಂತ ಭೋರ್ಗೆರತಕೂ!

    ReplyDelete